ವಜ್ರಮುನಿ ಅವರ ಮೊದಲ ಹೆಸರು ಸದಾನಂದ ಸಾಗರ್ ಎಂದು. ಇವರು ಮೇ 10 1944 ರಂದು ಕನಕಪಾಳ್ಯದಲ್ಲಿ ಜನಿಸಿದ್ದಾರೆ. ಇವರು ಕನ್ನಡ ಸಿನಿಮಾಗಳಲ್ಲಿ ಸಾಕಷ್ಟು ನೆಗೆಟಿವ್ ಪಾತ್ರಗಳನ್ನು ಮಾಡಿ ತುಂಬ ಜನಪ್ರಿಯ ಆಗಿದ್ದರು. ವಜ್ರಮುನಿ ಅವರು 1969 ರಲ್ಲಿ ಮಲ್ಲಮ್ಮನ ಪವಾಡ ಚಿತ್ರದ ಮೂಲಕ ಕನ್ನಡದ ಬೆಳ್ಳಿ ತೆರೆಯ ಮೇಲೆ ಕಾಲಿಟ್ಟರು. ಇದಾದ ಮೇಲೆ ಸಾಕಷ್ಟು ಚಿತ್ರಗಳಲ್ಲಿ ನೆಗೆಟಿವ್ ರೋಲ್ ಗಳನ್ನು ಅನ್ನು ಮಾಡಿ ತುಂಬಾ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ.
ಇದರಲ್ಲಿ ಮಲ್ಲಮ್ಮನ ಪವಾಡ, ಗೆಜ್ಜೆಪೂಜೆ, ತಾಯಿ ದೇವರು, ಸಿಪಾಯಿ ರಾಮು, ನ್ಯಾಯವೇ ದೇವರು, ಬಂಗಾರದ ಮನುಷ್ಯ, ಕುಳ್ಳ ಏಜಂಟ್ 000, ಬಲೆ ಹುಚ್ಚ, ಬಿಡುಗಡೆ, ಮೂರೂವರೆ ವಜ್ರಗಳು, ಬಂಗಾರದ ಪಂಜರ, ಭಕ್ತ ಕುಂಬಾರ, ಉಪಾಸನೆಾ ಸಂಪತ್ತಿಗೆ ಸವಾಲಅ ಮಯೂರ, ದಾರಿ ತಪ್ಪಿದ ಮಗ, ಕಳ್ಳ ಕುಳ್ಳ, ಪ್ರೇಮದ ಕಾಣಿಕೆ, ಬಹದ್ದೂರ್ ಗಂಡು, ಬಡವರ ಬಂಧು, ಬಬ್ರು ವಾಹನ, ಗಿರಿ ಕನ್ಯೆ, ಗಲಾಟೆ ಸಂಸಾರ, ಶಂಕರ್ ಗುರು, ಸ್ನೇಹ ಸೇಡು, ಆಪರೇಷನ್ ಡೈಮಂಡ್ ರಾಕೆಟ್, ಮುಯ್ಯಿಗೆ ಮುಯ್ಯಿ, ಮಧುರ ಸಂಗಮ, ಕಿಲಾಡಿ ಕಿಟ್ಟು, ಕಿಲಾಡಿ ಜೋಡಿ, ಹುಲಿಯ ಹಾಲಿನ ಮೇವು, ನಾನೊಬ್ಬ ಕಳ್ಳ, ರವಿಚಂದ್ರ, ಪಟ್ಟಣಕ್ಕೆ ಬಂದ ಪತ್ನಿಯರು.
ಭೂಮಿಗೆ ಬಂದ ಭಗವಂತ, ಅಂತ ಭಾರಿ, ಭರ್ಜರಿ, ಬೇಟೆ, ಗರುಡ ರೇಖೆ, ಊರಿಗೆ ಉಪಕಾರಿ, ಸಾಹಸಸಿಂಹ, ನನ್ನ ದೇವರು, ಖದೀಮ ಕಳ್ಳರು, ಚಕ್ರವ್ಯೂಹ, ಬೆಂಕಿಯ ಬಲೆ, ಮುತ್ತೈದೆ ಭಾಗ್ಯ, ಗಂಡು ಬೇರುಂಡ, ಅಪೂರ್ವ ಸಂಗಮ, ಬೇಟೆ, ಸತ್ಯಂ ಶಿವಂ ಸುಂದರಂ, ಸಾಂಗ್ಲಿಯಾನ, ಯುಗ ಪುರುಷ, ಸಿಬಿಐ ಶಂಕರ್, ಒಂಟಿ ಸಲಗ, ಹಾಂಕಾಂಗ್ ನಲ್ಲಿ ಏಜೆಂಟ್ ಅಮರ್, ರಾಜಾ ಕೆಂಪು ರೋಜಾ, ಮೈಸೂರು ಜನ, ಸಾಹಸಿ, ಕನಸಿನ ರಾಣಿ, ಆಕಸ್ಮಿಕ, ರಾಯರು ಬಂದರು ಮಾವನ ಮನೆಗೆ, ಕೊಲ್ಲೂರ ಶ್ರೀಮೂಕಾಂಬಿಕ, ಲಾಕಪ್ ಡೆತ್, ಒಡಹುಟ್ಟಿದವರು ಚಿತ್ರಗಳು ವಜ್ರಮುನಿ ಅವರ ಜನಪ್ರಿಯ ಮತ್ತು ಹಿಟ್ ಚಿತ್ರಗಳೆಂದು ಹೇಳಬಹುದು.
ಇದರಲ್ಲಿ ವಜ್ರಮುನಿ ಅವರಿಗೆ ಹೆಚ್ಚು ಹೆಚ್ಚು ಹೆಸರು ತಂದು ಕೊಟ್ಟಿದ್ದು ಎಂದರೆ ಪ್ರಚಂಡ ರಾವಣ ಮತ್ತು ವಜ್ರ ಮುಷ್ಟಿ ಚಿತ್ರಗಳು. ವಜ್ರಮುನಿ ಅವರು ಖಳ ನಟರಿಗೆ ಖಳನಟರಾಗಿ ಕಾಣಿಸುತ್ತಿದ್ದರು. ಅವರು ಹೇಳುವ ಡೈಲಾಗ್ ಗಳು ಮತ್ತು ಮಾತನಾಡುವ ಶೈಲಿ ಎಲ್ಲವೂ ಕೂಡ ವಿಬ್ಬಿನ್ನ ಒಬ್ಬ ನಿಜವಾದ ಖಳ ನಟನ ರೀತಿಯೇ ಅವರ ಅಭಿನಯ ಇರುತ್ತಿತ್ತು. ಇವರ ಮುಖದ ಭಾವನೆಗಳು ಅದರಲ್ಲೂ ಮುಖವನ್ನು ನೋಡಿದರು ಅವರ ನಟನೆ ನೈಜ ರೀತಿ ಇರ್ತಾ ಇತ್ತು. ಅವರು ಒಬ್ಬ ಒಳ್ಳೆಯ ನಟ. ಅವರ ಅಭಿಮಾನಿಗಳು ಅವರನ್ನು ತುಂಬಾ ಇಷ್ಟ ಪಡುತಿದ್ದರು. ಈ ಕಾರಣಕ್ಕಾಗಿಯೇ ವಜ್ರಮುನಿ ಅವರನ್ನು ಎಲ್ಲರೂ ನಟ ಭೈರವ ಮತ್ತು ನಟ ಭಯಂಕರ ಎಂದು ಕರೆಯುತ್ತಿದ್ದರು. ವಜ್ರಮುನಿ ಅವರು ಜನವರಿ 5 2006 ರಂದು ಮೂತ್ರಪಿಂಡಗಳ ಸಮಸ್ಯೆಯಿಂದ ತೀರಿಕೊಂಡರು…